Svoboda | Graniru | BBC Russia | Golosameriki | Facebook
ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಾಲ್ಕನೆಯ ಪ್ರಕರಣ.
೨೩

ಪುಣ್ಯಪಾಪಗಳನ್ನು ಪರಿಶೀಲಿಸಿ ನ್ಯಾಯವನ್ನು ನಿರ್ಣಯಿಸಿ ಸುಖವನ್ನುಂಟು ಮಾಡತಕ್ಕ ಆ ಮೋಕ್ಷದಾತನಿಗೆ ನಾವು ಪರಮವಿಧೇಯರಾಗಿ ನಡೆದುಕೊಳ್ಳಬೇಕೆಂದು ಮತ್ತೊಂದು ಬಾರಿ ಹೇಳಬೇಕೆ? ನಾವು ಯಾವಾಗಲೂ ನಿರ್ದೋಷವಾಗಿ ನಡೆದುಕೊಳ್ಳಲಾರೆವಾದುದರಿಂದ ನಮ್ಮ ಅಪರಾಧಗಳನ್ನು ಕ್ಷಮಿಸುವುದಕ್ಕೋಸುಗವೂ, ನಮಗೆ ಬೇಕಾದುವುಗಳನ್ನು ದಯೆಪಾಲಿಸುವ ದಕ್ಕೋಸುಗವೂ, ನಮ್ಮ ಆಪದಗಳನ್ನು ಪರಿಹರಿಸುವುದಕ್ಕೋಸುಗವೂ ಸರ್ವಶಕ್ತನಾದ ಆ ಈಶ್ವರನನ್ನು ಗೌರವಪೂರ್ವಕವಾಗಿಯೂ, ನಿಶ್ಚಲಭಕ್ತಿಯೊಡನೆಯೂ ಪ್ರತಿದಿನವೂ ಪ್ರಾರ್ಥಿಸುತ್ತಿರಬೇಕು. ಇದೇ ನಾವು ಭಗವಂತನ ವಿಷಯದಲ್ಲಿ ನಡೆದುಕೊಳ್ಳಬೇಕಾದ ಮುಖ್ಯಧರ್ಮಗಳು

ಚಂದ್ರ-ಈರೀತಿಯಾಗಿ ನಾವು ಭಗವಂತನ ವಿಷಯದಲ್ಲಿ ನಡೆದುಕೊಳ್ಳದಿರುವ ಪಕ್ಷದಲ್ಲಿ ನಮ್ಮನ್ನು ಆತನು ಶಿಕ್ಷಿಸುವನೆ?

ಗುರು—ಭಗವಂತನು ಆತ್ಮಸ್ತುತಿಗೆ ಸಂತೋಷಪಡತಕ್ಕವನಲ್ಲ. ದೂಷಣೆಗೆ ಕೋಪಿಸತಕ್ಕವನೂ ಅಲ್ಲ; ಆದುದರಿಂದ ನಾವು ಈ ವಿಷಯದಲ್ಲಿ ಪ್ರತ್ಯೇಕವಾದ ಶಿಕ್ಷೆಯನ್ನು ಹೊಂದದಿದ್ದರೂ, ನಮಗಿಷ್ಟು ಉಪಕಾರಗಳನ್ನು ಮಾಡಿರುವ ಪ್ರೇಮನಿಧಿಯ ವಿಷಯದಲ್ಲಿ ಕೃತಘ್ನರಾಗಿ ವಿಧಾಯಕ ಕೃತ್ಯಗಳನ್ನು ಬಿಟ್ಟು ಉವಕಾರಸ್ಮತಿಯಿಲ್ಲದ ಕಠಿನಾತ್ಮರಾಗುವೆವಾದುದರಿಂದ ಸಾಮಾನ್ಯ ಜನರ ವಿಷಯದಲ್ಲಿಯೂ ಸಂಪೂರ್ಣವಾದ ದುಷ್ಟ್ರವರ್ತನವುಳ್ಳವರಾಗುವೆವಾದುದರಿಂದ ಹಾಳಾಗುವೆವು. ಅದುಕಾರಣ ಶಿಕ್ಷೆಯನ್ನು ಹೊಂದುವೆವು.

ಚಂದ್ರ-ದುಮಾರ್ಗದಲ್ಲಿ ಪ್ರವರ್ತಿಸದೆ ಸೂಕ್ತವಾದ ಮಾರ್ಗದಲ್ಲಿ ಪ್ರವರ್ತಿಸುವವರಿಗೆ ಭಗವದ್ಧ್ಯಾನಾದಿಗಳಿಂದ ಪ್ರಯೋಜನವಿಲ್ಲವೆ?

ಗುರು-ಬೇಕಾದಷ್ಟು ಪ್ರಯೋಜನವಿರುವುದು. ಈಶ್ವರಧ್ಯಾನದಿಂದ ನಮ್ಮ ಮನಸ್ಸಿಗೆ ಆನಂದವುಂಟಾಗುವುದು ಮಾತ್ರವಲ್ಲದೆ, ಸತ್ಕಾರ್ಯಾ ಚರಣೆಯಲ್ಲಿ ಪ್ರೋತ್ಸಾಹವೂ ದುಷ್ಕಾರಗಳಲ್ಲಿ ವಿರಕ್ತಿಯೂ ಉಂಟಾಗುವುವು. ಆದುದರಿಂದ ಸಕಲವಿಧವಾದ ಶ್ರೇಯಸ್ಕೂ ನಮಗೆ ಕರಗತವಾಗುವುದು,